Thursday, March 13, 2008

ಸಾಗರ ಮಾರಿಜಾತ್ರೆಯಲ್ಲಿ ಕಣ್ಣಿಗೆ ಬಿದ್ದ ಮಾರಮ್ಮ...!

















ಉದರ ನಿಮಿತ್ತಂ..............

ಖಡ್ಗ, ತ್ರಿಶೂಲ ಮೊದಲಾದ ಆಯುಧ ಹಿಡಿದ ಎಂಟು ಕೈಗಳು, ಬೆಂಕಿಯುಗುಳುವ ಕೆಂಪು ಕಣ್ಣು, ಚಾಚಿದ ಉರಿ ನಾಲಿಗೆ, ಕೊರಳಲ್ಲಿ ರುಂಡಗಳ ಸರಮಾಲೆ ಇರುವ ಅಕರಾಳ-ವಿಕರಾಳವಾದ ಮಾರಮ್ಮನೇ ಎದುರು ಬಂದು ಕಷ್ಟ ಸುಖ ವಿಚಾರಿಸಿ ಹರಸಿದರೆ ! ಸಾಗರ ಮಾರಿಜಾತ್ರೆಯಲ್ಲಿ ಹಾಗೊಂದು ದೃಶ್ಯ ಕಂಡು ಬಂತು.
ಉದರ ನಿಮಿತ್ತಂ ಬಹುಕೃತ ವೇಷಂ ಎಂಬುದು ಪ್ರಾಚೀನ ನುಡಿ. ಹೊಟ್ಟೆಪಾಡಿಗೆ ಯಾವ ದಂದೆಯಾದರೂ ನಡೆಯುತ್ತದೆ .ಇದಕ್ಕೆ ಮಾರಿ ವೇಷದಾರಿಯೇ ಸಾಕ್ಷಿ.
ತೀರ್ಥಹಳ್ಳಿ ತಾಲುಕಿನ ನೊಣಬೆಟ್ಟು ಸಮೀಪದ ಅಂಬುತೀರ್ಥದ ಮಲ್ಲಪ್ಪ ಭಾಗವತನಿಗೆ ಮಾರಿ ವೇಷವೇ ಜೀವನ ನಿರ್ವಹಣೆಯ ದಾರಿ. ಕಳೆದ ಇಪ್ಪತ್ತೈದು ವರ್ಷದಿಂದ ಎಲ್ಲೇ ಜಾತ್ರೆಯಾಗಲಿ ಅಲ್ಲಿ ಮಲ್ಲಪ್ಪನ ಮಾರಿ ವೇಷ ಪ್ರತ್ಯಕ್ಷವಾಗುತ್ತದೆ.ಜಾತ್ರೆಯ ಜನ ಜಂಗುಳಿಯಲ್ಲಿ ಅವನ ವೇಷಕ್ಕೆ ಕೈ ಮುಗಿದು, ಅಡ್ಡಬಿದ್ದು, ಕೊಟ್ಟ ಅರಸಿನ ಕುಂಕುಮವನ್ನು ಪ್ರಸಾದವೆಂದು ಸ್ವೀಕರಿಸಿ, ಕಾಣಿಕೆ ನೀಡುವ ಭಾವುಕರೂ ಇರುತ್ತಾರೆ,ಅದನ್ನೇ ಬಂಡವಾಳವಾಗಿಸಿಕೊಂಡು ಮಲ್ಲಪ್ಪನೂ ಬದುಕುತ್ತಿದ್ದಾನೆ. ಅವನನ್ನು ನಂಬಿಕೊಂಡ ಹೆಂಡಿರು ಮಕ್ಕಳೂ ಬದುಕುತ್ತಿದ್ದಾರೆ.



ಪೂರ್ಣ ವಿ-ರಾಮ/ ಕಲಗಾರು

1 comment:

sunaath said...

ಮಾರಿಕಾಂಬೆ ಮಲ್ಲಪ್ಪನಿಗೆ ಅನುಗ್ರಹಿಸಿದ್ದಾಳೆ ಎನ್ನೋಣವೆ!